
ಸರಳತೆ ಮೆರೆದ ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್
ಸೈಕಲ್ ಸವಾರಿ ಮೂಲಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿ
ಇಂದು ಜನಪ್ರತಿಗಳು ಜೊತೆಯಲ್ಲಿ ಗನ್ ಮ್ಯಾನ್ ,ಐಷಾರಾಮಿ ಕಾರುಗಳು ,ಪಟಾಕಿಗಳ ಸದ್ದು, ತಮಟೆ ವಾದ್ಯಗಳ ಅರ್ಭಟ ಫ್ಲೆಕ್ಸ್ ಗಳ ಭರಾಟೆ ,ಹಾರ,ತುರಾಯಿಗಳು ಮೂಲಕ ಉದ್ಘಾಟನೆ ಕಾರ್ಯಕ್ರಮ ನಡೆಯುತ್ತದೆ.
ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಪ್ರಕಾಶನಗರ ವಾರ್ಡ್ ನಲ್ಲಿ ಡಾಂಬರೀಕರಣ ಕಾಮಗಾರಿ ಮತ್ತು ಶ್ರೀರಾಮಮಂದಿರದಲ್ಲಿ ಸ್ಕೇಟಿಂಗ್ ಕಾಮಗಾರಿಗಳಿಗೆಯ ಗುದ್ದಲಿಪೂಜೆ ಕಾರ್ಯಕ್ರಮಕ್ಕೆ ಮಾಜಿ ಶಿಕ್ಷಣ ಸಚಿವರು,ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಸೈಕಲ್ ಹತ್ತಿ ಎರಡು ಉದ್ಘಾಟನೆಯಲ್ಲಿ ಭಾಗಿಯಾದರು.
ಯಾವುದೇ ಅರ್ಭಟವಿಲ್ಲ .ಸ್ಥಳೀಯ ಸಾರ್ವಜನಿಕರು ,
ಬಿ.ಜೆ.ಪಿ.ಕಾರ್ಯಕರ್ತರು ಪಾಲ್ಗೊಂಡಿದ್ದರು.
ಇಂತಹ ಕಲುಷಿತ ರಾಜಕೀಯ ವಾತವರಣದಲ್ಲಿ ನಮ್ಮ ನಡುವೆ ಎಸ್.ಸುರೇಶ್ ಕುಮಾರ್ ರವಂತಹ ರಾಜಕಾರಣಿಗಳು ಇಂದಿನ ರಾಜಕೀಯ ರಂಗಕ್ಕೆ ಅವಶ್ಯಕತೆ ಇದೆ ಎನಿಸುತ್ತದೆ.


















