खबरों की खबरनई दिल्लीबैंगलूरु-कर्नाटकब्रेकिंग न्यूज़

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಾ ಮನೆಗಳಿಗೂ ಇನ್ನೂರು ಯೂನಿಟ್ ವಿದ್ಯುತ್ ಉಚಿತ ಎಂದು ಇನ್ನಿತರ ಘೋಷಣೆ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಿತು ವಿದ್ಯುತ್ ಉಚಿತವಾಗಿ ನೀಡಲು ಹೋಗಿ ಕಮರ್ಷಿಯಲ್ ಬಿಲ್ ಹೆಚ್ಚಿಸುವ ನಿರ್ಧಾರ ಕೈಗೊಂಡಿರುವ ಸರ್ಕಾರದ ನಿರ್ಧಾರದಿಂದ ಉತ್ಪಾದಕರು ಕಚ್ಚಾವಸ್ತುಗಳ ಬೆಲೆ ಹೆಚ್ಚಿಸುವ ನಿರ್ಧಾರವನ್ನು ಮಾಲೀಕರುಗಳು ಮುಂದಾಗಿರುವುದರಿಂದ ಮತ್ತೆ ಸಾರ್ವಜನಿಕರ ಮೇಲೆ ಹೊರೆಯಾಗಲಿದೆ ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಬಿ. ಎನ್. ಜಗದೀಶ್ ತಿಳಿಸಿದರು.

WhatsApp Image 2026-04-18 at 09.08.39
previous arrow
next arrow

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಾ ಮನೆಗಳಿಗೂ ಇನ್ನೂರು ಯೂನಿಟ್ ವಿದ್ಯುತ್ ಉಚಿತ ಎಂದು ಇನ್ನಿತರ ಘೋಷಣೆ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಿತು ವಿದ್ಯುತ್ ಉಚಿತವಾಗಿ ನೀಡಲು ಹೋಗಿ ಕಮರ್ಷಿಯಲ್ ಬಿಲ್ ಹೆಚ್ಚಿಸುವ ನಿರ್ಧಾರ ಕೈಗೊಂಡಿರುವ ಸರ್ಕಾರದ ನಿರ್ಧಾರದಿಂದ ಉತ್ಪಾದಕರು ಕಚ್ಚಾವಸ್ತುಗಳ ಬೆಲೆ ಹೆಚ್ಚಿಸುವ ನಿರ್ಧಾರವನ್ನು ಮಾಲೀಕರುಗಳು ಮುಂದಾಗಿರುವುದರಿಂದ ಮತ್ತೆ ಸಾರ್ವಜನಿಕರ ಮೇಲೆ ಹೊರೆಯಾಗಲಿದೆ ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಬಿ. ಎನ್. ಜಗದೀಶ್ ತಿಳಿಸಿದರು.

ಜಯ ಕರ್ನಾಟಕ ಕಛೇರಿಯಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದರು.

ಸಾರ್ವಜನಿಕರಿಗೆ 200 ಯೂನಿಟ್ ವಿದ್ಯುತ್ ಮುಂದಾಗಿದ್ದು ಜನರು ಸಂತೋಷಪಡುವುದಕ್ಕಿಂತ ಸಂಕಟ ಪಡುವ ಪರಿಸ್ಥಿತಿ ಎದುರಾಗಿದ್ದು, ದಿನನಿತ್ಯ ಬಳಸುವ ಸಾಮಗ್ರಿಗಳು, ಹಲವು ಉತ್ಪನ್ನಗಳ ಬೆಲೆ ಹೆಚ್ಚಳವಾದರೆ ಕೊನೆಗೆ ಖರೀದಿದಾರರ ಮೇಲೆ ಬೆಲೆ ಹೆಚ್ಚಳದ ಹೊರೆ ಬೀಳುವುದರಿಂದ ಸುತ್ತಿ ಬಳಸಿ ಬೆಲೆ ಏರಿಕೆಯ ಬಿಸಿಯನ್ನು ಸಾರ್ವಜನಿಕರೇ ಅನುಭವಿಸಬೇಕಾಗುತ್ತದೆ.

ಈಗಾಗಲೇ ಅಕ್ಕಿ ಗಿರಣಿಗಳು, ಹೋಟೆಲ್ ಮಾಲೀಕರು, ಹಲವು ಕೈಗಾರಿಕೆಗಳು, ಕೆಎಂಎಫ್, ಕಂಪನಿಗಳು ಬೆಲೆ ಏರಿಕೆ ಸುಳಿವುಗಳನ್ನು ಬಿಟ್ಟಿದ್ದು ಹಂತ ಹಂತವಾಗಿ ಮುಂದೆ ಎಲ್ಲಾ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡುವುದರಿಂದ ಉಚಿತ ವಿದ್ಯುತ್ ನೀಡಲು ಹೋಗಿ ಸರ್ಕಾರ ನಮ್ಮಿಂದ ಹಣವನ್ನು ಹಿಂಬದಿಯಿಂದ ಪಡೆಯಲು ಹೊರಟಿದೆ ಎಂದು ಸಾರ್ವಜನಿಕರಿಂದ ಆರೋಪ ಕೇಳಿಬರುತ್ತಿದೆ ಎಂದು ತಿಳಿಸಿದರು.

ಕಮರ್ಷಿಯಲ್ ವಿದ್ಯುತ್ ಹೇರಿಕೆಯನ್ನು ತಕ್ಷಣ ಬಿಟ್ಟು ಸಾರ್ವಜನಿಕರಿಗೆ ಇದರಿಂದಾಗುವ ಒರೆಯನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು

100% LikesVS
0% Dislikes

Related Articles

Leave a Reply

Your email address will not be published. Required fields are marked *

Back to top button